ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Thursday, May 26, 2016

ಜೀವನ

ಜೀವನ
ತಾಯ ಹೃದಯ ಕಮಲದಲ್ಲಿ ಅರಳುವುದೇ ಜೀವನ
ತೊದಲ ನುಡಿಯ ತಪ್ಪುಗಳೇ ಜೀವನ
ಮೊದಲ ಗುರುವಿನಿಂದ ಕಲಿತ ಪಾಠವೇ ಜೀವನ
ಸುಂದರ ದಿನಗಳ ಅರ್ಥೈಸಿಕೊಳ್ಳುವುದೇ ಜೀವನ
ಸರ್ವರ ನುಡಿ ಕಲಿತು ಸರ್ವಜ್ಞನಾಗುವುದೇ ಜೀವನ
ಗುರಿಯರಿತು ಸಾಧಿಸುವುದೇ ಜೀವನ
ಸಮಸ್ಯೆಗಳ ಬೆನ್ನಟ್ಟುವ ದೈರ್ಯವೇ ಜೀವನ
ತನು ಮನವ ಶುದ್ಧಿಕರಣವೇ ಜೀವನ
ಆದರ್ಶ ಮೌಲ್ಯವುಳ್ಳ ಸಮಾಜ ನಿರ್ಮಾಣವೇ ಜೀವನ
ಉದ್ದಕ್ಕೂ ಪ್ರತಿಯೊಬ್ಬರನ್ನು ಅರ್ಥಮಾಡಿಕೊಳ್ಳುವುದೇ ಜೀವನ
ಸಮಾಜಕ್ಕೆ ತನ್ನದೆಯಾದ ಕೊಡುಗೆ ನೀಡುವುದೇ ಜೀವನ
ಸಂಸಾರದ ಹಣತೆಯಲ್ಲಿ ಬೆಳಕಾಗುವುದೇ ಜೀವನ
ನಿಸರ್ಗ ನಿಯಮಗಳ ಅರಿಯುವುದೇ ಜೀವನ
ನೆಲೆ ನಿಲ್ಲಲು ಅವಕಾಶವೇ ಇಲ್ಲದ ಜೀವನ
ಕೊನೆಗೊಂದು ದಿನ ಜೀವನದ ಅಂತ್ಯವೇ ಜೀವನ.

ಮಹಾಂತೇಶ ರಾಜಗುರು, ಶಿಕ್ಷಕರು.
ಕೆನರಾ ಕೇಂಬ್ರಿಡ್ಜ್ ಶಾಲೆ, ಯಡವನಹಳ್ಳಿ.

No comments:

Post a Comment