ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Friday, April 4, 2014

ಇವತ್ತು ದೇವರ ದಾಸಿಮಯ್ಯನ ಹುಟ್ಟುದಿನ.- ರಾಜೇಂದ್ರ ಪ್ರಸಾದ್

ಇವತ್ತು ದೇವರ ದಾಸಿಮಯ್ಯನ ಹುಟ್ಟುದಿನ...
ಆದ್ಯ ವಚನಕಾರ ದೇವರ ದಾಸಿಮಯ್ಯ, 12ನೇ ಶತಮಾನದ ವಚನ ಚಳುವಳಿಯ ಮುನ್ನಾ ನೂರು ವರ್ಷಗಳ ಹಿಂದೆಯೇ ವಚನಗಳನ್ನು ಕಟ್ಟಿದವರು.. ಪತ್ನಿ ದುಗ್ಗಳೆಯೊಂದಿಗೆ ಅನ್ಯೋನ್ಯ ದಾಂಪತ್ಯದೊಂದಿಗೆಸೀರೆ ನೇಯುವ ನೇಕಾರಿಕೆಯ ಮಾಡುತ್ತಾ
ಮುಂದೆ ಬಸವಾದಿ ಶರಣರಿಂದ 'ನೆರೆ ನಂಬೋ ನೆರೆ ನಂಬೋ ದಾಸ-ದುಗ್ಗಳೆಯಂತೆ'
ಎಂದು ಹಾಡಿಸಿಕೊಂಡ ಮಹಾನುಭಾವಿ..
ತಾನೇ ನೇಯ್ದು, ಉಟ್ಟ ಉಡುಗೆಯನ್ನು ಶಿವನಿಗೆ ದಾನಕೊಟ್ಟು 'ತವನಿಧಿಯನ್ನು' ಪಡೆದರೆಂಬುದು ದಂತಕಥೆ.
ದೇವರ ದಾಸಿಮಯ್ಯನನ್ನು ಕುರಿತು ಬ್ರಹ್ಮಶಿವ, ಹರಿಹರ,ರಾಘವಾಂಕ, ಭೀಮಕವಿ, ವಿರೂಪಾಕ್ಷ ಪಂಡಿತ, ಸಿದ್ದ ನಂಜೇಶ ಮುಂತಾದ ಕನ್ನಡ ಕವಿಕೃತಿಗಳಲ್ಲಿ ಅಲ್ಲದೇ
ಕ್ರಿ.ಶ.1148 ರ ಗೊಬ್ಬೂರಿನ ಶಾಸನ, ಕ್ರಿ.ಶ.1167ರ ಚಿಕ್ಕಮುದನೂರಿನ ಶಾಸನ, ಕ್ರಿ.ಶ.1200 ರ ಅರಸೀಕೆರೆ ಶಾಸನ, ಕ್ರಿ.ಶ.1259 ರ ಹಿರಿಯೂರಿನ ಶಾಸನಗಳಲ್ಲಿ ಉಲ್ಲೇಖಗಳಿವೆ
ನನ್ನಿಷ್ಟದ ಕೆಲವು ವಚನಗಳು
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜರಿದೊಮ್ಮೆ ನುಡಿಯದಿರ!
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ!
ರಾಮನಾಥ.
***

ಉಂಕೆಯ ನಿಗುಚಿ ಸರಿಗೆಯ ಸಮಗೊಳಿಸಿ
ಸಮಗಾಲನಿಕ್ಕಿ ಅಣಿಯೇಳ ಮುಟ್ಟದೆ
ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು.
ಈ ಸೀರೆಯ ನೆಯ್ದವ ನಾನೊ ನೀನೋ?ರಾಮನಾಥ.
***
ಬಯಲ ಬಣ್ಣವ ಮಾಡಿ;
ಸ್ವಯವ ನಿಲವ ಮಾಡಿ
ಸುಳಿವಾತನ ಬೆಡಗ ಬಲ್ಲವರಾರೈ? ರಾಮನಾಥ!
***
ನಾನೊಂದು ಸುರಗಿಯನೇನೆಂದು ಹಿಡಿವೆನು?
ಏನ ಕಿತ್ತೇನನಿರಿವೆನು?
ಜಗವೆಲ್ಲಾ ನೀನಾಗಿಪ್ಪೆ ಕಾಣಾ! ರಾಮನಾಥ.
****

No comments:

Post a Comment