ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Sunday, September 8, 2013

ವಚನ - ಶ್ರೀ ಬೇಲೂರು ರಘುನಂದನ್

ವಚನ - 205

ಹೊಸತು ಎಂದು ಏನ ಬರೆದರೂ,
ಹೊಸತರಂತೆ ಕಾಣುತ್ತಿಲ್ಲ.
ಅವರಿವರು ಕುಣಿದ ನೆಲದ ಮೇಲೆ,
ಮತ್ತೆ ಕುಣಿಯಲೂ ಮನಸಿಲ್ಲ.
ರಸ ಕಸ ಹೊಸತೆಂದು ರಚನೆಗೆ
ಪದವಿತ್ತೊಡೆ,ಅಳುಕು ತಪ್ಪುತ್ತಿಲ್ಲ.
ಬರೆದುದನೆ ಬರೆವುದ ಬಿಡಿಸಿ,
ಹೊಸದಾರಿಗೆ ಹೆಸರಿಟ್ಟು ಕೆಸರಲ್ಲಿ
ಅರಳುವ ಕಮಲದ ನಿತ್ಯ ಕಿಶೋರತೆಯ
ಹೇಳಿಕೊಡಯ್ಯ ಶ್ವೇತಪ್ರಿಯ ಗುರುವೆ.

ಬೇಲೂರು ರಘುನಂದನ್
3.6.2013

-----------------------------------------------------------------


ವಚನ - 206

ಪ್ರಸ್ತದ ದಿನ ಹಸ್ತಮೈಥುನ ಮಾಡಿಕೊಂಡರೆ,
ರುಸ್ತುಮನೆಂದುಕೊಂಡ ಹೆಣ್ಣು ಕುಸಿದ ಕಡಲು.
ಮನಸು ಮೆಚ್ಚದೆ ದೇಹವನು ಕಚ್ಚಿ ಕೊಚ್ಚಲು ಹೋದರೆ,
ದೊಡ್ಡ ಹಾಸಿಗೆಯಲ್ಲೂ ಗಂಡು ಚಿಕ್ಕ ಹುಳವು.
ಮನಸು ಮಾಂಸ ಒಂದಾದರೇ ಮಾತ್ರ
ಶುಚಿಯೂ ರುಚಿಯೂ ಕುಶಿಯೂ ಕೊನೆಗೆ ಫಲವೂ
ಅಲ್ಲವೇ ಶ್ವೇತಪ್ರಿಯ ಗುರುವೆ.

----------------------------------------------------------------
ವಚನ - 212

ಶ್ರೀ ಬೇಲೂರು ರಘುನಂದನ್
ಕಟ್ಟುವ ಕನಸು ಕಾಣುವ ವಿಸ್ತಾರಕ್ಕೆ ರೆಕ್ಕೆ ಬಿಚ್ಚಿ ಚಾಚುವ ಹಕ್ಕಿಗೆ,
ಮೇಲೆ ಹಾರಿದಷ್ಟೂ ಗುಂಡು ಗೋಳ ಚಿಕ್ಕದು ದೃಷ್ಟಿಯೋ ದೊಡ್ಡದು.
ಮಣ್ಣ ಹುಡಿ ಇಟ್ಟಿಗೆಯ ಅಚ್ಚಿಗೆ ಸೋಕದಂತೆ ಸಾಕುವ ಈ ಮಣ್ಣ ಪಕ್ಷಿಗೆ,
ಅಣು ಪರಮಾಣು ಕಣವೆಲ್ಲ ಕಲೆಯ ರಂಗಶಾಲೆಯಲಿ ಹೊಸ ಪಾಠ ಹೊಸ ತಾಲೀಮು.
ಕಣ್ಣು ಬಿಟ್ಟು ಆಗಸದ ಅಟ್ಟ ಏರುವ ನಮ್ಮೂರಿನ ಕಾಜಣದ ಹಕ್ಕಿಗೆ ಕಂಡಿದೆಲ್ಲಾ ಹಸುರು,
ನೋಡಿದ್ದೆಲ್ಲಾ ಜೀವದುಸಿರು ಎಂದೂ ಬಯಸದು ಹಾರುವ ಕಲೆಗೆ ಹೆಸರು
ಶ್ವೇತಪ್ರಿಯ ಗುರುವೆ.


-ಬೇಲೂರು ರಘುನಂದನ್
27.8.2013

-

No comments:

Post a Comment