ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Friday, August 19, 2011

'ಕನ್ನಡ'ದ ಉಜ್ವಲ 'ಪ್ರಭ'...ಬಾಣಭಟ್ಟ ಕಂಡ ಕಂಡಲ್ಲಿ ತನ್ನ 'ಬಾಣ' ನೆಟ್ಟ?

ಕಣ್ಣೂ ಬಾಯಿ ಬಿಟ್ಟ ಹಾಗೆ ಬಿಟ್ಟು "ನೋಡ್ತಾ ಇದೀವಿ ಏನೇನ್ ಮಾಡ್ತಿದಾರೆ ಅಂತ!" ಲೋಕವೆ ಜನಲೋಕಪಾಲಕ್ಕೆ ಧ್ವನಿ ಎತ್ತುತ್ತಿರುವಾಗ ಪಿಟೀಲು ಕುಯ್ಯೂ ನೀರೋನ ಹಾಗೆ ಅದೆಲ್ಲೆಲ್ಲಿಗೊ ನೂರೆಂಟು ಬಾಣ ಬಿಟ್ಟುಕೊಂತ ಕೂತಿದ್ದಾರೆ.ಸ'ಗಣಿ'ಯನ್ನ ತಾವೂ ತಿಂದು ಬೂಸಿಯ ಮೂತಿಗೆ ಮಾತ್ರ ಎದ್ದುಕಾಣುವಂತೆ ಮುಖಪುಟದಲ್ಲೇ ನಿತ್ಯ ಘಂಟಾಘೋಷವಾಗಿ ಮೆತ್ತುತ್ತಿದ್ದಾರೆ.ಹೋದಲೆಲ್ಲ ಕತ್ತಲಲ್ಲಿ "ಬೆತ್ತಲೆ ಪ್ರಪಂಚ" ತೋರಿಸ್ತಿದಾರೆ.ಕಂಡಕಂಡಲ್ಲಿ ನೀರ್ ಬಿಡ್ತಿದಾರೆ.ಬಳ್ಳಾರಿ ಕೆಮ್ಮಣ್ಣು ತಿನ್ನೋ ಮಂದಿಯನ್ನೆಲ್ಲ ಎಲ್ಲೆಲ್ಲೊ "ಪ್ರೆಸ್" ಮಾಡಿ ಕೋಟಿಗೆ ಕೇವಲ ಇಪ್ಪತೈದೆ ಲಕ್ಷ ಕಡಿಮೆ ಕಾಸು ಗಿಂಜಿದ್ದಾರೆ.ಆ ಋಣಕ್ಕೆ ಪಾಪ ಅವರಿಗೆ ಸ್ವಲ್ಪ 'ಸಹಾಯ' ಮಾಡಿ ಅಂತ ಪ್ರಾಮಾಣಿಕ ಅಧಿಕಾರಿಗಳ ಮುಂದೆ ಹಲ್ಲುಗಿಂಜಿದ್ದಾರೆ.

ಇಷ್ಟಾಗಿಯೂ ಬೂಸಿಯಗೆ ಬ್ಲಾಕ್ ಮೇಲ್ ಮಾಡಿ ಜಿ ಕೆಟಗರಿಗೆ ಬಕೇಟು ಹಿಡಿದಿದ್ದಾರೆ,ತಮ್ಮ ಚಂಡಾಳ ಶಿಷ್ಯರಿಂದಲೂ ಹಿಡಿಸಿದ್ದಾರೆ.ಏಟ್ರಿಯದಂತಹ ಐಶಾರಮಿ ಲಾಡ್ಜುಗಳಲ್ಲಿ (ಶೋಕಿ ಹೆಚ್ಚಾಗಿದ್ದರು ಅದು 'ಆ' ವಿಷಯಗಳಲ್ಲಿ ಮಾತ್ರ ಅಪ್ಪಟ ಲಾಡ್ಜೆ?!) ಅಕಾಲದಲ್ಲಿ ಅಡ್ಡೆ ಹಾಕಿದ್ದಾರೆ.ಅದರ ಬಿಲ್ವಿದೆಯನ್ನ ಧೂಳು ತಿಂದವರ ಹಾಡಾಲೆದ್ದ ಜೇಬಿಂದಲೇ ಕೊಡಿಸಿ ಗುಡ್ಡೆ ಹಾಕಿದಾರೆ.ಇವರ "ರಾಶಿಚಕ್ರ" ಇವತ್ತಿನ ದಿನಪತ್ರಿಕೆಯೊಂದರಲ್ಲಿ ವಿವರವಾಗಿ ಬಂದಿದ್ದರೂ ತಾವು ಮಾಡಿದ್ದೆ "ಸರೀ ರೀ ಸರಿ" ಅಂಬ ಭಂಡತನವನ್ನೂ ನಾಚಿಕೆ ಬಿಟ್ಟು ಮೆರೆಯುತ್ತಿದ್ದಾರೆ.ನಾಳೆ ಮತ್ತೆ ಗಂಟಲು ಹರಕೊಂಡು 'ಬೆತ್ತಲಾಗುವ' ಇವರ "ನೂರೆಂಟು ತೂತುಗಳು" ಹಾಗ್ಹಾಗೆ ಹೊರ ಬಂದರೂ ಮೂರೂಬಿಟ್ಟು ಆರಾಮಾಗಿ "ನನಗಿದೆ ಇಷ್ಟನೋ" ಅಂತ ಹಲ್ಕಿರೀತಿದಾರೆ! ಇದರ "ಒಳ ಸುರುಳಿ"ಯಾದರೂ ಏನು?

No comments:

Post a Comment